Saturday 28 February 2015

ಜೀವನ ಕ್ಷಣ ಕ್ಷಣಕ್ಕೂ ಪಾಠ ಕಲಿಸುತ್ತೆ.. ಆದ್ರೆ ನಾವು ಅದನ್ನ ಸರಿಯಾಗಿ ಅರಿಯೋದಿಲ್ಲ ಅಷ್ಟೇ. ತಿಳಿದೇ ಮುಂದೇ ಹೋಗಿ ಎಡವಿ ಬೀಳೋದೇ ಜಾಸ್ತಿ. ಬಿದ್ದ ಮೇಲೂ ಗಮನಕ್ಕೆ ಬರ್ದಿದ್ರೆ ನಮ್ಮಂತಹ ಮುಠ್ಠಾಳರು ಮತ್ತೊಬ್ಬರು ಇರೋದಿಲ್ಲ. ಕೆಲವು ಬಾರಿಯಂತೂ ನಮ್ಮದಲ್ಲದ ತಪ್ಪಿಗೆ ನಾವು ನಮ್ಮನ್ನೇ ತಕ್ಕಡಿಯಲ್ಲಿ ಹಾಕಿ ತೂಗೋ ಹಾಗೇ ಮಾಡೋ ಮಂದಿ, ನಾವು ಬಿದ್ರೆ ನಗಾಡ್ತೆ ಇರೋಲ್ಲ. ಆಳಿಗೊಂದು ಕಲ್ಲು ಅನ್ನೋ ಹಂಗೆ ಸಿಕ್ಕ ಸಿಕ್ಕವರೆಲ್ಲಾ ಜಾಡ್ಸೋ ಕಾರ್ಯ ಚೆನ್ನಾಗಿಯೇ ಮಾಡ್ತಾರೆ.. ಅದ್ಕೆಲ್ಲಾ ಕೇರ್‌ ಮಾಡೋ ಜೀವ ಅಲ್ಲ ಇದು.. ಕೆಲವರು ಬಿಡಿ ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ ಅನ್ನೋ ಕೆಟಾಗರಿಗೇ ಸೇರ್ದವ್ರು.
ಅಂತಹದ್ದೇ ಮೊಂಡುತನ ನನ್ನಲ್ಲೂ ಇದೆ. ಇಲ್ಲಂತ ಅಲ್ಲ. ಆದ್ರೆ, ಯಾರೇ ಆಗ್ಲಿ ಎದುರಿಗೇ ನಿಲ್ಲೋರ್‌ ಜೊತೆ ಗುದ್ದಾಡಿ ಗೆಲ್ಬೋದು.. ಬೆನ್ನ ಹಿಂದೆ ನಿಂತು ಅಪಪ್ರಚಾರ ಮಾಡ್ತಾ ಓಡಾಡೋರಿಗೆ ನಿಜಕ್ಕೂ ನಾವು ಏನೂ ಮಾಡ್ಲಿಕ್ಕಾಗಲ್ಲ. ಅಷ್ಟಕ್ಕೂ ನಮ್ಮ ಬಗ್ಗೆ ಅದ್ಯಾಕೇ ಅವ್ರಿಗೇ ಅಷ್ಟೆಲ್ಲಾ Concern ಗೊತ್ತಿಲ್ಲ. ಆದ್ರೂ, ಒಂಥರಾ ಖುಷಿ ನನ್ನಂತವರಿಗೆ.. ಯಾಕೆಂದ್ರೆ, ನಮ್ಮ ಪ್ರತಿ ಚಲನ-ವಲನಗಳನ್ನೂ ಸೂಕ್ಷ್ಮವಾಗಿ ತಿಳಿಯೋ ಅವರು ಅವರಿಗೆ ಗೊತ್ತಿಲ್ಲದಂಗೆ ನಮ್ಮ ಪರ್ಸನಲ್‌ ಪಿಎಗಳಾಗಿ ಬಿಟ್ಟಿರ್ತಾರೆ.(ಸಂಬಳ ಗಿಂಬಳ ಎರಡೂ ಇಲ್ದಂಗೆ) ಇರ್ಲಿ ಬಿಡಿ ಅವ್ರ ಖುಷಿ.. ಅನುಭವಿಸ್ಕೋಳ್ಳಿ.. ನಮ್ ಗತ್ತು ಏನೂ ಕಮ್ಮಿ ಆಗಲ್ಲ. ಹಾಗಂತ ದುರಹಂಕಾರದ ಮಾತಲ್ಲ ಕಂಡ್ರಿ. ಸ್ವಾಭಿಮಾನದ ಮಾತು ಹೆಮ್ಮೆಯಿಂದ್ಲೇ ಹೇಳ್ಬೇಕು ಅನ್ಸತ್ತೆ
ಮೂರನೇ ವ್ಯಕ್ತಿಗಳು ಹುಟ್ಟಿಕೊಂಡಾಗ್ಲೆ ನಮ್ ಬೆಲೆ ಏನೂ ಅಂತ ನಮಿಗ್‌ ತಿಳಿಯೋದು. ಅದ್ರೆ ಅದ್ನ ಕಂಡು ಕೊರಗೋ ಮನಸ್ಥಿತಿ ಇಲ್ಲದಿದ್ರೆ ಎಲ್ಲವೂ ಸೌಖ್ಯ,.. ಎಲ್ಲವೂ ಕ್ಷೇಮ.. ಸೂಕ್ಷ್ಮ ಮನಸ್ಸಿನವ್ರು ಏನಾದ್ರೂ ಆಗ್ಬಿಟ್ರೆ ಕಥೆ ಮುಗೀತು. ಅಲ್ಲಿ ಒಂದು ಪುಟ್ಟ ಜೀವ ತನ್ನ ಹಂಗನ್ನೇ ತೊರೆಯೋ ಮಟ್ಟಿಗೆ ಅಲ್ಲಿ ಪರಿಸ್ತಿತಿ ಕೈಮೀರಿಬಿಡುತ್ತೆ. ಅವರ ಮಾತುಗಳು ಆ ಮಟ್ಟಕ್ಕೆ ಇರ್ತವೆ.
ಏನೋ ನಾವೊಂಚುರು ಮೊಂಡು ಬಿದ್ದಿರೋದ್ಕೆ ಹೆಂಗೋ ಮ್ಯಾನೇಜ್‌ ಆಗ್ತಿದೆ ಜೀವ..

ನೀತಿ: ಎಲ್ರೂ ಎಲ್ಲಾ ಕಾಲದಲ್ಲೂ ಒಂದೇ ತರ ಇರೋಲ್ಲ.. ಬಿಟ್ಬಿಡಿ ಬದುಕ್ಕೊಳ್ಳಿ.. ನಿಮ್ಹನ್ನ ಏನೂ ಅವ್ರು ಕಿತ್ಕೋಳ್ಳಲ್ಲ.. ಯಾಕಂದ್ರೆ ನಿಮ್ಮಂತ ಬುದ್ದಿ ಅವರಿಗಿಲ್ಲ ಅದಂತೂ ದಿಟ!

No comments:

Post a Comment